Wednesday 11 February, 2009

ವಿಚಾರ ದ್ರುಷ್ಟಿಕೋನ...

ಪ್ರತಿ ದಿನ....ಪ್ರತಿ ಕ್ಷಣ ಕೆಲವು ಘಟನೆಗಳು ನಮ್ಮ ಜೀವನದಲ್ಲಿ ಹಾಗೆ ಟಿವಿ ದಾರವಾಹಿತರ ಮೂಡಿ ಹೋಗತಾ ಇರುತ್ತೆ. ಅದರಲ್ಲಿ ಕೆಲವು ಸುಲಭವಾಗಿ ಮರೆತು ಮರೆಯಾಗುತ್ತೆ...ಆದ್ರೆ ಕೆಲವು ನಾವು ಮರೆಯಾಗುವರೆಗು ಹಾಗೆ ಹಸಿಯಾಗಿರುತ್ತೆ...ಹಾಗೆ ಒಂದು ಸಂದೇಶವನ್ನು ಕೊಟ್ಟು ಹೋಗುತ್ತೆ. ಅದನ್ನ ಹೇಗೆ ಅರ್ಥ ಮಾಡಕೊಳ್ಳೊದು ಅನ್ನೋದನ್ನ ಮಾತ್ರ ಪ್ರತಿ ವ್ಯಕ್ತಿಯ ಅವನ ವಿಚಾರ ದ್ರುಷ್ಟಿಕೋನ ನಿರ್ಧರಿಸುತ್ತಾ?.

ಅವತ್ತು ರಾತ್ರಿ ೧ ಗಂಟೆ ಸಮಯ, ಬಾಗಿಲು ತಟ್ಟಿ ತಂದೆಯವರನ್ನ ಕೂಗೋ ಹಾಗಿತ್ತು. ನಡು ರಾತ್ರಿ ಇದ್ಯಾರಿದು, ಒಮ್ಮೆ ಕಿಡಕಿಯಿಂದ ಇಣುಕಿ ನೊಡಿದರೆ ಅದು ಪಕ್ಕದ ಬಿದಿಯಲ್ಲಿ ವಾಸಿಸುವ ಮೇಸ್ತ್ರಿ ಮತ್ತೆ ಅವರ ಕೆಲವು ಗೆಳೆಯರು. ತಂದೆಯವರು “ಏನ್ರಿ ಮೀಸ್ತ್ರಿ ಇಷ್ಟೋತ್ತಲ್ಲಿ, ಏನು ಸಮಾಚಾರ...” ಅದಕ್ಕೆ ಮೇಸ್ತ್ರಿ “ಸರ್, ನಿಮ್ಮ ಮನ್ಯಾಗ ಯಾರರ ಸಣ್ಣ ಹುಡುಗ್ರು ಅದಾರನ್ರಿ.....??”. ನಡು ರಾತ್ರಿಲಿ ಬಂದು, ಈ ಪ್ರಶ್ನೆ ಕೆಳಿದ್ರೆ ಯಾರಿಗೆ ಆಶ್ಚರ್ಯ ಆಗೋಲ್ಲ. ಮೇಸ್ತ್ರಿ ಹಾಗೆ ಮುಂದುವರಿಸಿ.... “ಇದ್ರಾ ಅವರನ್ನ ಮಲಗಾಕ ಬಿಡಬ್ಯಾಡ್ರಿ.....ಬೆಳಗು ಮೂಂಜಾನಿ ತನಕಾ...”.

ಇದೆನಪ್ಪಾ ಗ್ರಹಚಾರ ಅಂತ ವಿಚಾರ ಮಾಡೊ ಮೊದಲು ಕನಿಷ್ಟ ನಾಲ್ಕು ಗಂಟೆ ಹಿಂದೆ ಹೋಗೊಣ....ಅಂದ್ರೆ ರಾತ್ರಿ ೧೦ ಗಂಟೆ ಸಮಯ. ಅವತ್ತು ರಾತ್ರಿ ಪಂಚಾಂಗದ ಪ್ರಕಾರ ರಾತ್ರಿ ೧೨ ನಂತರ ಚಂದ್ರ ಗ್ರಹಣ ಆಗೊದಿತ್ತು. ಅದಕ್ಕೆನು ಯಾರು ತಲೆ ಕೆಡಸಿಕೊಂಡಿರಲಿಲ್ಲ, ಯಾಕಂದ್ರೆ...ಗ್ರಹಣ ಮಾಮುಲಿ ನೋಡಿ. ಮಾಡಿರೊ ಅಡಿಗೆನೆಲ್ಲ ಮೂಗಿಸಿ...ಜೋತೆಗೆ “Crime Diary” ನೋಡಿ ಇನ್ನೆನು ಮಲಗೊ ಸಮಯ.... ಆದ್ರೆ ರಾತ್ರಿ ೧೦:೩೦ ಸಮಯ, ಗುಲಭರ್ಗದ ಒಬ್ಬ್ ಸ್ವಾಮೀಜಿ ಒಂದು ಭವಿಷ್ಯ ನೂಡಿದೆ ಬಿಟ್ರು. “ಈ ಗ್ರಹಣ ಮಕ್ಕಳಿಗೆ ಆಗಿ ಬರೋದಿಲ್ಲ, ಓಳಿತಲ್ಲ.....ಅದಕ್ಕೆ ಇವತ್ತು ಯಾರು ತಮ್ಮ ಮಕ್ಕಳನ್ನ ಮಲಗೊಕೆ ಬಿಡಬೆಡಿ...ಅಪ್ಪಿತಪ್ಪಿ ಮಲಗಿದ್ರೆ...ಬೆಳಗ್ಗೆ ಏಳೊ chance....ಕಡಿಮೆ!!!!”. ಈ ಒಂದು ಸ್ವಾಮಿಜಿಯವರ ಮಾತು ಬರಿ ಗುಲಭರ್ಗಕ್ಕೆ ಸಿಮಿತ ವಾಗಿದ್ರೆ ಚೆನ್ನಾಗಿರತಿತ್ತೆನೋ!!!!.....ಆದ್ರೆ ಅದು ಹಾಗಾಗಲಿಲ್ಲವೆ...ಬಿಧರ್, ವಿಜಾಪುರ, ಬಾಗಲಕೋಟೆ, ಅಥಣಿ, ಬೆಳಗಾವಿ,ಗದಗ, ದಾರವಾಡ, ರಾಯಚೂರು, ಕೋಪ್ಪಳ...ಜಿಲ್ಲೆಗಳಿಗೆ ಹಬ್ಬೊಕೆ ಬರಿ ೫೦ ರಿಂದ ೮೦ ನೀಮಿಷಗಳು ಸಾಕಾಯ್ತು ನೋಡಿ. ಅವತ್ತು ಪಾಪ ಏಷ್ಟು ಚಿಕ್ಕ ಹುಡುಗ್ರುದು ಮತ್ತೆ ಪಾಲಕರ ನಿದ್ದೆ ಹಾಳಾಗಿದೆಯೊ?. ಆದ್ರೆ ಸ್ವಾಮಿಜಿ ಮಾತ್ರ ರಾತ್ರೊ ರಾತ್ರಿ ಪ್ರಸಿದ್ದಿ ಗಿಟ್ಟಿಸಿ ಕೊಂಡಿದ್ದಾಯ್ತು. ಈ ಸುದ್ದಿನೆ, ಅವತ್ತು ರಾತ್ರಿ ೧ ಕ್ಕೆ ತಂದೆಯವರ ಕಿವಿಗೆ ಹಾಕಿದ್ದು ಆ ಮೇಸ್ತ್ರಿ.

ಈ ಮೇಲಿರೊ ಒಂದು ಚಿಕ್ಕ ಘಟನೆಯಲ್ಲಿ ನೀವು ಬಾಗಿಯಾಗಿದ್ರೆ....ಈ ಘಟನೆಯಿಂದ ನಾವು ತಿಳಿದುಕೋಳ್ಳುವದು ಏನಾದ್ರು ಇದ್ರೆ.....ಏನದು? ನನ್ನ ಬಾಲ್ಯ ಸ್ನೆಹಿತ...ಮೆಲಾಗಿ ಒಬ್ಬ ಉತ್ತಮ ಶಿಕ್ಷಕ, ಅವನ ವಿಚಾರ ದ್ರುಷ್ಟಿಕೋನ ಹಿಗಿತ್ತು. ಈ ಘಟನೆಯಿಂದ ನಾವು ೩ ಸಂಗತಿಗಳನ್ನ ತಿಳಿದು ಕೋಳ್ಳಬಹುದು.

ಒಂದನೆಯದಾಗಿ: ನಾವು ೨೧ನೆ ಶತಮಾನದಲ್ಲಿದ್ದು....ಸಾಮಾಜಿಕವಾಗಿ ಬೇಳವನಿಗೆ ಅಗಿದ್ರು ಕೊಡ, ಇನ್ನು ಮೂಡ ನಂಬಿಕೆಗಳಿಗೆ ಏಷ್ಟು ಬೆಲೆ ಕೋಡುವ ಜನಗಳಿದ್ದಾರೆ.
ಏರಡನೆಯದಾಗಿ: ಈ ಸಂಪರ್ಕ ಮಾದ್ಯಮಗಳ ಹಾವಳಿ ಏಷ್ಟರಮಟ್ಟಿಗಿದೆ ಅಂದ್ರೆ....ಕೆವಲ ೫೦ ರಿಂದ ೮೦ ನಿಮಿಷದಲ್ಲಿ ಕನಿಷ್ಟ ಪಕ್ಷ ಅಂದ್ರು ೧೨ ಜಿಲ್ಲೆ ಗಳಿಗೆ ಸ್ವಾಮಿಗಳ ವಾಣಿ...ಹಬ್ಬಿತ್ತು.

ಇನ್ನು, ಕೊನೆಯದಾಗಿ.....ಮೆಸ್ತ್ರಿ ಅಂತ ಮೂಗ್ದ ಜನ...ರಾತ್ರಿ ತಾವು ಮಲಗದೆ, ಪಕ್ಕದ ಮನೆಯವರನ್ನ...ಬಿದಿಯಲ್ಲಿ ಇರುವ ಏಲ್ಲ ಜನರ ಮನೆಗೆ ಹೋಗಿ...ವಿಚಾರಿಸಿದ್ರು......ಇದರಿಂದ ನಾವು ತಿಳಿದು ಕೊಳ್ಳುವದು...ಮೂಕ್ಯವಾಗಿ...ನಮ್ಮ ಜನಗಳ ಮದ್ದೆ ಇರುವ ಪ್ರಿತಿ, ವಿಷ್ವಾಸ ಮತ್ತು ಕಾಳಜಿ..... :)