Thursday 20 August, 2009

ಚಿಕ್ಕ ಸಸ್ಪೆನ್ಸ ಕಥೆ

ಸಾತೊಡಿ ಫಾಲ್ಸ್ನ್ ನಲ್ಲಿ ನಡೆದ ಒಂದು ವಿಚಿತ್ರ ಸಿನಿಮಿಯ ಸನ್ನಿವೇಶ ಇಲ್ಲಿದೆ...

ಅವತ್ತು ಶನಿವಾರ್ ನಮ್ಮ ಗ್ಯಾಂಗ tour mood ನಲ್ಲಿತ್ತು, ನಾಳೆ ಪವನ engagement ಇತ್ತು, ಆದ್ರೆ ಇವತ್ತು ಮಾಡೊಕೆ ಬೆರೆ ಕೆಲ್ಸಾ ಇರಲಿಲ್ಲ ಅದಕ್ಕೆ ಸಾತೊಡಿ ಫಾಲ್ಸ್ ಹೊಗುವೆ ನಿರ್ದಾರ ಮಾಡಿದ್ವಿ. ಅದಕ್ಕೆ ಅಂತ ಒಂದು scorpio ಬಾಡಿಗೆ ಹುಬ್ಬಳ್ಳಿಯಲ್ಲಿ ತಗೋಡ್ವಿ. ಅದು ಬೆಳಗ್ಗೆ ೭ ಗಂಟೆ, ಆದ್ರೆ ನಮ್ಮ ಡ್ರೈವರ್ ಪುಲ್ಲ ಟೈಟ್ ಆಗಿದ್ರು. ಬೆಳಗ್ಗೆ ಬೆಳಗ್ಗೆ ತಿರ್ಠ ಹಾಕಿ ತೆಲಾಡತಾ ಇದ್ದಿದ್ದು ನಮ್ಮ ಕಾರಿನ ಡ್ರೈವರ್ ಮಂಜುನಾಥ, ಇವರ ಜೋತೆಗೆ ಮತ್ತೊಬ್ಬ ಖಾನ್. ದಾರಿ ಉದ್ದಕ್ಕು ನಮ್ಮ ಮಂಜುನಾಥರ ಪುರಾಣ ಕೇಳಿ ಕೇಳಿ ಸಾಕಾಗಿತ್ತು. ಹಾಗು ಹಿಗು ಏರಡು ಮೂರು ಸಾರಿ ದಾರಿ ತಪ್ಪಿ...ಅಲ್ಲೆ ಸುತ್ತಾಡಿ...ಕೊನೆಗು ಸಾತೊಡಿ ಪಾಲ್ಸ್ ತಲುಪಿದ್ಡು ಅಕೀಲ್, ಸುಬಿನ್, ಗಣೇಶ್ ಮತ್ತೆ ನಾನು.

ಪಾಲ್ಸ್ನ್ ನಲ್ಲಿ ಸಕ್ಕತ್ತ ಮಜಾಮಾಡಿ ವಾಪಸ್ ಕಾರ್ ಹತ್ರ ಬಂದ್ವಿ, ಈಗ ಸುರುವಾಯ್ತು ನೋಡಿ ಕಥೆ.....
ಬರಿಯೊದು ಬೆಜಾರು, ಅದಕ್ಕೆ audio ಬ್ಲಾಗ್ ಮಾಡೊದು ಸಕತ್ತಾಗಿರುತ್ತೆ, ಏನಂತಿರಾ?

Tuesday 17 March, 2009

ಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು

ಏಲ್ಲೊ ಕೆಳಿದ ಕಥೆ.....

ನಾನು, ವೆಂಕ, ಸೀನ – ಆತ್ಮೀಯ ಗೆಳೆಯರು. ಒಂದೇ ರೂಮಿನಲ್ಲಿದ್ದು ಇಂಜಿನಿಯರಿಂಗ್ ಪಾಸ್ ಮಾಡಿದವರು. ಹುಡಗಿಯರ ಬಗ್ಗೆ ಹಲವಾರು ಕನಸುಗಳನ್ನು ಹಂಚಿಕೊಂಡ ನಮಗೆ ಈಗ ಮದುವೆಯ ವಯಸ್ಸು.

ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಾಗಿಲ್ಲವೆನ್ನಿಸಿಬಿಟ್ಟಿತು. ನನಗಂತೂ ಅವಳ ಹಲ್ಲುಗಳು ಉಬ್ಬೆನ್ನಿಸಿತು. ಸೀನ ಕೂಡಾ “ಹಲ್ಲೇನೋ ಪರವಾಗಿಲ್ಲ, ಆದರೆ ಸೊಂಟ ದಪ್ಪ” ಅಂತ ಮೂಗು ಹಿಂಡಿದ. ನಾವೆಲ್ಲಾ ಕಂಡ ಕನಸಿನ ಕನ್ಯೆಯರಿಗೂ, ಇವಳಿಗೂ ಹೋಲಿಕೆಯಿಲ್ಲವೆಂದು ಇಬ್ಬರೂ ನಿರ್ಧರಿಸಿದೆವು. ಊಟಕ್ಕೆ ಕುಳಿತಾಗ ಹಾರ-ಬಾಸಿಂಗಗಳ ಸಮೇತ ನಮ್ಮ ಬಳಿ ಬಂದು ವೆಂಕ “ಹೇಗಿದಾಳೋ?” ಅಂತ ಕಳಕಳಿಯಿಂದ ಕೇಳಿದ. “ತುಂಬಾ ಚೆನ್ನಾಗಿದಾಳೆ. ಯು ಆರ್ ಲಕ್ಕಿ....” ಅಂತ ಇಬ್ಬರೂ ಒಟ್ಟಿಗೇ ಹೇಳಿದೆವು. “ಥ್ಯಾಂಕ್ಸ್ ಕಣ್ರೋ.... ನಾಲ್ಕೈದು ಹುಡುಗಿಯರನ್ನ ನೋಡಿದ್ದೆ. ಆದರೆ ಇವಳನ್ನ ನೋಡಿದ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅನ್ನಿಸಲೇ ಇಲ್ಲ” ಅಂತ ಹೆಮ್ಮೆಯಿಂದ ಹೇಳಿಕೊಂಡ. ನಾನು, ಸೀನ ಮುಖ ಮುಖ ನೋಡಿಕೊಂಡೆವು.

ಮತ್ತೆ ಆರೇ ತಿಂಗಳಿಗೆ ಸೀನನ ಮದುವೆಯೂ ಆಯಿತು. ವಿಚಿತ್ರವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಾಗಿಲ್ಲವೆನಿಸಿತು. ಮೂಗು ಸ್ವಲ್ಪ ಮೊಂಡು! ವೆಂಕನಂತೂ “ಹೋಗಿ ಹೋಗಿ ಟೆನ್ನೀಸ್ ಕೋರ್ಟನ ಮದುವೆಯಾಗಿದಾನಲ್ಲೋ! ಎಂಥಾ ’ಖರಾಬ್’ ಟೇಸ್ಟ್ ಮಾರಾಯ.... ಕಡೇ ಪಕ್ಷ ನನ್ನನಾದರೂ ಒಂದು ಮಾತು ಕೇಳಬಹುದಿತ್ತಲ್ಲ” ಅಂತ ಪೇಚಾಡಿದ. ನಮ್ಮ ಗೊಣಗಾಟವೇನೇ ಇದ್ದರೂ, ಸೀನ ಬಳಿ ಬಂದಾಗ “ಯು ಆರ್ ಲಕ್ಕಿ” ಅಂತ ಕೈ ಕುಲುಕಿದೆವು. ಸೀನ ನನ್ನೊಬ್ಬನನ್ನೇ ಪಕ್ಕಕ್ಕೆ ಕರೆದು “ವೆಂಕನ ತರಹ ಹಾರಿಬಲ್ ಆಯ್ಕೆ ನಂದಲ್ಲ, ಅಲ್ವೇನೋ?” ಅಂತ ಕೇಳಿದ. “ನೊ, ನೊ....” ಅಂತ ನಾನವನನ್ನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.

ನಾನಂತೂ ಹುಡುಗಿಯ ಆಯ್ಕೆಯಲ್ಲಿ ತುಂಬಾ ಜಾಗರೂಕನಾಗಿದ್ದೆ. ಉಬ್ಬು, ಹಲ್ಲು, ದಪ್ಪ, ಸೊಂಟ, ಮೊಂಡು ಮೂಗು...ಯಾವುದೂ ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರೂ ಮದುವೆಯ ದಿನ ಗೆಳೆಯರೇನನ್ನುವರೋ ಎಂಬ ಆತಂಕದಲ್ಲಿದ್ದೆ. ಪುರೋಹಿತರು, ವೀಡಿಯೋದವರು, ಬಂಧುಬಳಗದವರು ಕಣ್ಣು ತಪ್ಪಿಸಿ ಗೆಳೆಯರ ಬಳಿ ಹೋಗಿ “ಹೇಗಿದಾಳೋ?” ಅಂತ ಉದ್ವೇಗದಲ್ಲಿ ಕೇಳಿದೆ. “ಯು ಆರ್ ಲಕ್ಕಿ....” ಅಂತ ಇಬ್ಬರೂ ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. “ಸುಳ್ಳು ಹೇಳಬೇಡ್ರೋ....ನಿಜ ಹೇಳಿ....ನಂಗೇನೂ ಬೇಜಾರಾಗಲ್ಲ” ಅಂತ ಬೇಡಿಕೊಂಡೆ. “ಸುಳ್ಳು ಯಾಕೆ ಹೇಳೋಣ. ನಿಜವಾಗಿಯೂ ನೀನು ಲಕ್ಕಿ...” ಅಂತ ಮತ್ತೊಮ್ಮೆ ನನ್ನ ಕೈ ಕುಲುಕಿ, ಒಬ್ಬರಿಗೊಬ್ಬರು ಮುಖ ನೋಡಿಕೊಂಡರು!!!

Wednesday 11 February, 2009

ವಿಚಾರ ದ್ರುಷ್ಟಿಕೋನ...

ಪ್ರತಿ ದಿನ....ಪ್ರತಿ ಕ್ಷಣ ಕೆಲವು ಘಟನೆಗಳು ನಮ್ಮ ಜೀವನದಲ್ಲಿ ಹಾಗೆ ಟಿವಿ ದಾರವಾಹಿತರ ಮೂಡಿ ಹೋಗತಾ ಇರುತ್ತೆ. ಅದರಲ್ಲಿ ಕೆಲವು ಸುಲಭವಾಗಿ ಮರೆತು ಮರೆಯಾಗುತ್ತೆ...ಆದ್ರೆ ಕೆಲವು ನಾವು ಮರೆಯಾಗುವರೆಗು ಹಾಗೆ ಹಸಿಯಾಗಿರುತ್ತೆ...ಹಾಗೆ ಒಂದು ಸಂದೇಶವನ್ನು ಕೊಟ್ಟು ಹೋಗುತ್ತೆ. ಅದನ್ನ ಹೇಗೆ ಅರ್ಥ ಮಾಡಕೊಳ್ಳೊದು ಅನ್ನೋದನ್ನ ಮಾತ್ರ ಪ್ರತಿ ವ್ಯಕ್ತಿಯ ಅವನ ವಿಚಾರ ದ್ರುಷ್ಟಿಕೋನ ನಿರ್ಧರಿಸುತ್ತಾ?.

ಅವತ್ತು ರಾತ್ರಿ ೧ ಗಂಟೆ ಸಮಯ, ಬಾಗಿಲು ತಟ್ಟಿ ತಂದೆಯವರನ್ನ ಕೂಗೋ ಹಾಗಿತ್ತು. ನಡು ರಾತ್ರಿ ಇದ್ಯಾರಿದು, ಒಮ್ಮೆ ಕಿಡಕಿಯಿಂದ ಇಣುಕಿ ನೊಡಿದರೆ ಅದು ಪಕ್ಕದ ಬಿದಿಯಲ್ಲಿ ವಾಸಿಸುವ ಮೇಸ್ತ್ರಿ ಮತ್ತೆ ಅವರ ಕೆಲವು ಗೆಳೆಯರು. ತಂದೆಯವರು “ಏನ್ರಿ ಮೀಸ್ತ್ರಿ ಇಷ್ಟೋತ್ತಲ್ಲಿ, ಏನು ಸಮಾಚಾರ...” ಅದಕ್ಕೆ ಮೇಸ್ತ್ರಿ “ಸರ್, ನಿಮ್ಮ ಮನ್ಯಾಗ ಯಾರರ ಸಣ್ಣ ಹುಡುಗ್ರು ಅದಾರನ್ರಿ.....??”. ನಡು ರಾತ್ರಿಲಿ ಬಂದು, ಈ ಪ್ರಶ್ನೆ ಕೆಳಿದ್ರೆ ಯಾರಿಗೆ ಆಶ್ಚರ್ಯ ಆಗೋಲ್ಲ. ಮೇಸ್ತ್ರಿ ಹಾಗೆ ಮುಂದುವರಿಸಿ.... “ಇದ್ರಾ ಅವರನ್ನ ಮಲಗಾಕ ಬಿಡಬ್ಯಾಡ್ರಿ.....ಬೆಳಗು ಮೂಂಜಾನಿ ತನಕಾ...”.

ಇದೆನಪ್ಪಾ ಗ್ರಹಚಾರ ಅಂತ ವಿಚಾರ ಮಾಡೊ ಮೊದಲು ಕನಿಷ್ಟ ನಾಲ್ಕು ಗಂಟೆ ಹಿಂದೆ ಹೋಗೊಣ....ಅಂದ್ರೆ ರಾತ್ರಿ ೧೦ ಗಂಟೆ ಸಮಯ. ಅವತ್ತು ರಾತ್ರಿ ಪಂಚಾಂಗದ ಪ್ರಕಾರ ರಾತ್ರಿ ೧೨ ನಂತರ ಚಂದ್ರ ಗ್ರಹಣ ಆಗೊದಿತ್ತು. ಅದಕ್ಕೆನು ಯಾರು ತಲೆ ಕೆಡಸಿಕೊಂಡಿರಲಿಲ್ಲ, ಯಾಕಂದ್ರೆ...ಗ್ರಹಣ ಮಾಮುಲಿ ನೋಡಿ. ಮಾಡಿರೊ ಅಡಿಗೆನೆಲ್ಲ ಮೂಗಿಸಿ...ಜೋತೆಗೆ “Crime Diary” ನೋಡಿ ಇನ್ನೆನು ಮಲಗೊ ಸಮಯ.... ಆದ್ರೆ ರಾತ್ರಿ ೧೦:೩೦ ಸಮಯ, ಗುಲಭರ್ಗದ ಒಬ್ಬ್ ಸ್ವಾಮೀಜಿ ಒಂದು ಭವಿಷ್ಯ ನೂಡಿದೆ ಬಿಟ್ರು. “ಈ ಗ್ರಹಣ ಮಕ್ಕಳಿಗೆ ಆಗಿ ಬರೋದಿಲ್ಲ, ಓಳಿತಲ್ಲ.....ಅದಕ್ಕೆ ಇವತ್ತು ಯಾರು ತಮ್ಮ ಮಕ್ಕಳನ್ನ ಮಲಗೊಕೆ ಬಿಡಬೆಡಿ...ಅಪ್ಪಿತಪ್ಪಿ ಮಲಗಿದ್ರೆ...ಬೆಳಗ್ಗೆ ಏಳೊ chance....ಕಡಿಮೆ!!!!”. ಈ ಒಂದು ಸ್ವಾಮಿಜಿಯವರ ಮಾತು ಬರಿ ಗುಲಭರ್ಗಕ್ಕೆ ಸಿಮಿತ ವಾಗಿದ್ರೆ ಚೆನ್ನಾಗಿರತಿತ್ತೆನೋ!!!!.....ಆದ್ರೆ ಅದು ಹಾಗಾಗಲಿಲ್ಲವೆ...ಬಿಧರ್, ವಿಜಾಪುರ, ಬಾಗಲಕೋಟೆ, ಅಥಣಿ, ಬೆಳಗಾವಿ,ಗದಗ, ದಾರವಾಡ, ರಾಯಚೂರು, ಕೋಪ್ಪಳ...ಜಿಲ್ಲೆಗಳಿಗೆ ಹಬ್ಬೊಕೆ ಬರಿ ೫೦ ರಿಂದ ೮೦ ನೀಮಿಷಗಳು ಸಾಕಾಯ್ತು ನೋಡಿ. ಅವತ್ತು ಪಾಪ ಏಷ್ಟು ಚಿಕ್ಕ ಹುಡುಗ್ರುದು ಮತ್ತೆ ಪಾಲಕರ ನಿದ್ದೆ ಹಾಳಾಗಿದೆಯೊ?. ಆದ್ರೆ ಸ್ವಾಮಿಜಿ ಮಾತ್ರ ರಾತ್ರೊ ರಾತ್ರಿ ಪ್ರಸಿದ್ದಿ ಗಿಟ್ಟಿಸಿ ಕೊಂಡಿದ್ದಾಯ್ತು. ಈ ಸುದ್ದಿನೆ, ಅವತ್ತು ರಾತ್ರಿ ೧ ಕ್ಕೆ ತಂದೆಯವರ ಕಿವಿಗೆ ಹಾಕಿದ್ದು ಆ ಮೇಸ್ತ್ರಿ.

ಈ ಮೇಲಿರೊ ಒಂದು ಚಿಕ್ಕ ಘಟನೆಯಲ್ಲಿ ನೀವು ಬಾಗಿಯಾಗಿದ್ರೆ....ಈ ಘಟನೆಯಿಂದ ನಾವು ತಿಳಿದುಕೋಳ್ಳುವದು ಏನಾದ್ರು ಇದ್ರೆ.....ಏನದು? ನನ್ನ ಬಾಲ್ಯ ಸ್ನೆಹಿತ...ಮೆಲಾಗಿ ಒಬ್ಬ ಉತ್ತಮ ಶಿಕ್ಷಕ, ಅವನ ವಿಚಾರ ದ್ರುಷ್ಟಿಕೋನ ಹಿಗಿತ್ತು. ಈ ಘಟನೆಯಿಂದ ನಾವು ೩ ಸಂಗತಿಗಳನ್ನ ತಿಳಿದು ಕೋಳ್ಳಬಹುದು.

ಒಂದನೆಯದಾಗಿ: ನಾವು ೨೧ನೆ ಶತಮಾನದಲ್ಲಿದ್ದು....ಸಾಮಾಜಿಕವಾಗಿ ಬೇಳವನಿಗೆ ಅಗಿದ್ರು ಕೊಡ, ಇನ್ನು ಮೂಡ ನಂಬಿಕೆಗಳಿಗೆ ಏಷ್ಟು ಬೆಲೆ ಕೋಡುವ ಜನಗಳಿದ್ದಾರೆ.
ಏರಡನೆಯದಾಗಿ: ಈ ಸಂಪರ್ಕ ಮಾದ್ಯಮಗಳ ಹಾವಳಿ ಏಷ್ಟರಮಟ್ಟಿಗಿದೆ ಅಂದ್ರೆ....ಕೆವಲ ೫೦ ರಿಂದ ೮೦ ನಿಮಿಷದಲ್ಲಿ ಕನಿಷ್ಟ ಪಕ್ಷ ಅಂದ್ರು ೧೨ ಜಿಲ್ಲೆ ಗಳಿಗೆ ಸ್ವಾಮಿಗಳ ವಾಣಿ...ಹಬ್ಬಿತ್ತು.

ಇನ್ನು, ಕೊನೆಯದಾಗಿ.....ಮೆಸ್ತ್ರಿ ಅಂತ ಮೂಗ್ದ ಜನ...ರಾತ್ರಿ ತಾವು ಮಲಗದೆ, ಪಕ್ಕದ ಮನೆಯವರನ್ನ...ಬಿದಿಯಲ್ಲಿ ಇರುವ ಏಲ್ಲ ಜನರ ಮನೆಗೆ ಹೋಗಿ...ವಿಚಾರಿಸಿದ್ರು......ಇದರಿಂದ ನಾವು ತಿಳಿದು ಕೊಳ್ಳುವದು...ಮೂಕ್ಯವಾಗಿ...ನಮ್ಮ ಜನಗಳ ಮದ್ದೆ ಇರುವ ಪ್ರಿತಿ, ವಿಷ್ವಾಸ ಮತ್ತು ಕಾಳಜಿ..... :)

Wednesday 7 January, 2009

The only man in the Cabinet



Bangalore Dec 6, 2008 Page 8 - ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಮೂಡಿಬಂದ ಉತ್ತಮ ಲೇಖನ. "Munich" ಚೀತ್ರ ನೋಡಿ, ತಿಳಿಯದೆ ಹೊದ್ರೆ ಈ ಕಥೆ ಓದಿ.
ಇಮೇಜ್ ಕ್ಲಿಕ್ಕ ಮಾಡಿ...

ಭೋಪಾಲ ಅನಿಲ ದುರಂತ: ಮರೀಚಿಕೆಯಾದ ನ್ಯಾಯ - ಪ್ರೀತಿಕಾ ಪಿಳಿಂಜ



Bangalore Dec 2, 2008 Page 8 - ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಮೂಡಿಬಂದ ಒಂದು ಉತ್ತಮ ಲೇಖನ. ಇಮೇಜ್ ಕ್ಲಿಕ್ಕ ಮಾಡಿ...