Tuesday 15 July, 2008

ಬಿಡದೆ ಹಿಂಬಾಲಿಸುವವ…..

ಬೆಳಗಿನ ಜಾವ ೮ ಗಂಟೆ ಇರಬಹುದು, office ನೆಲಹಂತದಲ್ಲಿ ಲಿಫ್ಟಗಾಗಿ ಕಾಯುತ್ತಿದ್ದೆ. ಮೆಲ್ಚಾವಣಿಯಿಂದ ನೆಲಮಹಡಿಗೆ ತಲುಪುವ ರಸ್ತೆಯಿಂದ ಸೂರ್ಯನ ಕಿರಣಗಳು ಬಳ್ಳಿಯಹಾಗೆ ಜಾರಿ ನೆಲ ಮಹಡಿಯನ್ನು ಹಬ್ಬುವ ಹಾಗಿತ್ತು…. ಹಾಗೆ ದೊಡ್ಡದಾಗಿ ಹಬ್ಬಿಕೊಂಡ ಆಲದ ಮರದ ನೆರಳುಕೂಡ ನೆಲಮಹಡಿ ತಲುಪಿ, ನನ್ನ ನೆರಳನ್ನು ಆಕ್ರಮಿಸಿ ಕೊಂಡಿತ್ತು. ಅದೆ ಲಿಪ್ಟಗಾಗಿ ಕಾಯುತ್ತಿದ್ದ ಇನ್ನುಳಿದವರನ್ನ ಗಮನಿಸಿದೆ, ಸ್ವಲ್ಪ ಕತ್ತಲೆ ಇತ್ತು ಅಥವಾ ನಿದ್ದೆಯ ಗೂಂಗೀನಲ್ಲೊ.... “ಅವಳೇ ಇರಬಹುದು!!! ಇಲ್ಲಾ… ಅವಳು ಇಸ್ಟು ಬೇಗ office ಬರೊಲ್ಲಾ, ಮತ್ತಾರೊ……….” ಅಂದುಕೊಂಡು ಸುಮ್ಮಗಾದೆ, ಆದ್ರೆ ಮನಸ್ಸು ಸುಮ್ಮಗಾಗೊ ಗಿರಾಕಿ ಅಲ್ಲಾ, ಮತ್ತೆ ಅವಳನ್ನೇ ಗೂರಾಯಿಸಿದೆ…. “ಹಮ್ಮ್!!! ಅವಳೇ…..ಗ್ಯಾರಂಟಿ…..ರೂಪಾ”, ಹೆಸರಿಗೆ ಮೋಸಮಾಡದ ನಸುಗಪ್ಪು ಕ್ರೀಷ್ಣ ಸುಂದರಿ, ಮೂರು ತಿಂಗಳ ಹಿಂದೆ ಕಂಪನಿ ಸೇರಿಕೊಂಡವಳು. ಮೂಲತಹ ಕೆರಳದವಳು, ಆದ್ರೆ ವಿದ್ಯಾಭ್ಯಾಸ ತಮಿಳುನಾಡಿನ ಚೇನೈ ಸಿಟಿಯಲ್ಲಿ. ನೋಡಿದ ಮೊದಲ್ನೆ ದಿನಾನೆ ಆಫೀಸನಲ್ಲಿರೋ ಸಾಕಸ್ಟು ಸಂಬಾಯಿತ ಹುಡುಗರ ಮನಸ್ಸಿನ ಪ್ರಶಾಂತ ಅಲೆಗಳನ್ನು ಡಿಸ್ಟರ್ಬ್ ಮಾಡಿದವಳು, ಅದರಲ್ಲಿ ನಾನು ಒಬ್ಬ!!!. ಸ್ವಲ್ಪ ವಿಚಾರಿಸಿದರೆ!!!, ಅದು ಪ್ರೀತಿ ಮಾತ್ರ ಅಗಿರಲಿಲ್ಲ ಅದೇನೊ attraction ಅಂತಾರಲ್ಲ…ಹಾಗೆ ಇರಬಹುದೆನೋ...ಈ ವಯಸ್ಸಿನಲ್ಲಿ ಇದು ಸಹಜವಾಗಿ ಬರೋದು ನೋಡಿ!!!.

ಏರಡು…ಮೂರು ಸಾರಿ ಅವಳನ್ನೆ…ಅವಳಿಗರಿವಿರದ ಹಾಗೆ ನೋಡಿದೆ…ಮನಸ್ಸಿನಲ್ಲಿ ಕೆಟ್ಟ ಭಾವನೆ ಮಾತ್ರ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅವಳು ನನ್ನ ನೋಟವನ್ನು ಗಮನಿಸಿ ಒಂದು ಚಿಕ್ಕ ನಗೆ ಕೊಟ್ಲು. ಅಯ್ಯೊ!!!! ಇನ್ನೆನು ಜೀವನ ಸಾರ್ಥಕವಾಯ್ತು….ಮಾತಾಡಿಸಿ ಬಿಡ್ಲಾ… ಅವಳನ್ನ ಸಾಕಸ್ಟು ಸಾರಿ ಮಾತಾಡಿಸಿದ್ದೆ….ಆದ್ರೆ ಇವತ್ತು ಯಾಕೋ ಮಾತು ಮನಸ್ಸಿನ ಬಾಗಲು ತೆರದು ಹೋರಗೆ ಬರಲಿಲ್ಲ. ಇನ್ನೆನು ಧೈರ್ಯ ಮಾಡಿ ಮಾತಾಡಿಸಲು ಮುಂದಾದೆ….ಅವಳನ್ನ ಒಂದು ಸಾರಿ ಗಮನಿಸಿದೆ…ಅಸ್ಟರಲ್ಲೆ ಅವಳು ಲಿಫ್ಟ ಬೇಡ ಅಂತ ನಿರ್ಧರಿಸಿ… ಮೆಟ್ಟಿಲು ಕಡೆ ಹೆಜ್ಜೆ ಹಾಕಿದ್ಲು… ಅಯ್ಯೊ ಏನೋ ಮಾತಾಡ ಬೇಕಿತ್ತು, ಸಾದ್ಯವಾಗಲಿಲ್ಲ ಅಂತಾ ವಿಚಾರಿಸ್ತಿದ್ದಹಾಗೆ….ಲಿಫ್ಟ ಮಿಸ್ಸ್ ಮಾಡಕೋಂಡೆ, ಇನ್ನುಳಿದವರೂ ಕಾಲಿ ಆದ್ರು….ಒಬ್ಬನೆ ಅಲ್ಲೆ ಸ್ಸಲ್ಪ ಸಮಯ ನಿಂತೆ. ಮನಸ್ಸಿನಲ್ಲಿ ಸಾವಿರ ಮಾತು…ಅದೇ ಗೂಂಗು….ಅಸ್ಟರಲ್ಲಿ ಪಕ್ಕದಲ್ಲಿ ಯಾರೋ ಬಂದು ನಿಂತಹಾಗೆ ಅನಿಸ್ತು. ಪಕ್ಕದಲ್ಲಿ ನಿಂತಿರೊ ವ್ಯಕ್ತಿನ ಒಂದು ಸಾರಿ ಗಮನಿಸಿದೆ...ನೋಡಲು ಭಯಂಕರವಾದ…ಮೋಕದಲ್ಲಿ ಬೆರೆಯವರನ್ನು ಹಿಯಾಳಿಸಿ….ಅನಗಿಸುವ ನಗು ತುಂಬಿ ಕೋಂಡಿದ್ದ… ಕಪ್ಪನೆಯ… ಭಯ ಮೂಡಿಸುಮ… ಚಿಕ್ಕ ಮಕ್ಕಳನ್ನು ಹೆದರಿಸಲು ಅಜ್ಜಿ ಕರೆದಾಗ ಬರುವ….ಗುಮ್ಮನಂತಿತ್ತು. ಅದು ನನ್ನನ್ನೆ ನೋಡಿ ಹಿಯಾಳಿಸಿ ನಗುತ್ತಾ ನನ್ನ ಹತ್ತಿರಕ್ಕೆ ಬರುತ್ತಿತ್ತು… ಭಯದಿಂದ ನಾನು ಲಿಫ್ಟ ಬಿಟ್ಟು…ಮೆಟ್ಟೀಲು ಹಿಡಿದು ನಡೆಯಲು ಪ್ರಾರಂಬಿಸಿದೆ. ಅದು ಮಾತ್ರ ನನ್ನ ಹಿಂಬಾಲಿಸುವದನ್ನು ಬಿಡಲಿಲ್ಲ… ಅದರ ಮೋಕ ಮತ್ತೊಮ್ಮೆ ನೋಡಲು ನನ್ಗೆ ಅಂಜಿಕೆ ಇತ್ತು. ಹಾಗೆ ಮೆಟ್ಟಿಲು ಏರುತ್ತ, ಕಟ್ಟಡದ terrace ಮುಟ್ಟಿದ್ದೆ…ಅದು ಮಾತ್ರ ನನ್ನ ಬೆನ್ನು ಬಿಡಲಿಲ್ಲ.

ಇನ್ನು ಮುಂದೆ ಹೋಗೊದಕ್ಕೆ ಬೇರೆ ದಾರಿ ಇರಲಿಲ್ಲ. ಅದನ್ನು ಧೈರ್ಯವಾಗಿ ಎದರಿಸುವದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಅಂದುಕೊಂಡು…. ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡೆ…. ಮತ್ತೋಮ್ಮೆ ಅದನ್ನು ನೋಡಲು ಮನಸ್ಸಿಲ್ಲದಿದ್ದರು ಅದರ ಕಡೆ ಮೋಕಮಾಡಿ…. ಮೆಲ್ಲನೆ ನನ್ನ ಕಣ್ಣುಗಳನ್ನ ತೆರೆದೆ. ಅದನ್ನೊಮ್ಮೆ ಸಿಟ್ಟಿನಿಂದ….ಗಮನಿಸಿದೆ. ಅದು ನನಗೆ ಗೊತ್ತಿರುವ ವ್ಯಕ್ತಿ!!! ದಿನನಿತ್ಯ ನನ್ನನು ಹಿಂಬಾಲಿಸುವವ… ಅದು ಬೆರೆ ಯಾರು ಅಲ್ಲ….ನನ್ನ ಸ್ವಂತ “ನೆರಳು” ನನ್ನನು ಹೀಗೆ ಹಿಂಬಾಲಿಸುತ್ತಿತ್ತು. ಅದು ನನ್ನಲಿ ಅಡಗಿರುವ ಅಂಜಿಕೆ….ಕೆಲವು ವಿಷಯದಲ್ಲಿರುವ ಭಯವನ್ನು ಪ್ರತಿಬಿಂಬಿಸುವ ಪ್ರತಿರೂಪವಾಗಿತ್ತು. ಅದು ಗುಮ್ಮ ಅಲ್ಲ ಅನ್ನೊ ಸಮಾಧಾನ ಇತ್ತು. ಆದ್ರೆ ಮನಸ್ಸಿನಲ್ಲಿ ಅಡಗಿರುವ ಭಯವನ್ನು ಕಿತ್ತು ಹಾಕುವ ವರೆಗು, ಮನಸ್ಸಿನ ಪ್ರತಿಬಿಂಬದ ರೂಪವಾಗಿರುವ ಈ ನೆರಳು ಮಾನವನ ಬೆನ್ನು ಬಿಡುವ ಆಸಾಮಿ ಅಲ್ಲ ಅನಿಸ್ತು.

ಅಸ್ಟರಲ್ಲಿ….ಅಣ್ಣ ಇಟ್ಟಿರುವ alarm ಕೆಳಿಸ್ತು, ಕಣ್ಣುಗಳನ್ನ ಮೆಲ್ಲನೆ ತೆರೆದೆ. ಬಿಗಿಯಾಗಿದ್ದ ಕೋರಳನ್ನ ಮೆಲ್ಲನೆ ಹೊರಳಿಸಿ ಗಮನಿಸಿದೆ…..ಪಕ್ಕದಲ್ಲಿ ಗುಮ್ಮ ಇರಲಿಲ್ಲ!!!!!

Monday 7 July, 2008

ಚೀಲ್ಡ್ರನ್ ಪ್ಲೇ ಹೋಮ್

ನಾನು ಕೆಲಸಮಾಡುವ ಕಛೇರಿ ಮನೆಯಿಂದ ಕೇವಲ ೫ ಕೀಮಿ, ಮದ್ಯದಲ್ಲಿ ೬ ಚೀಲ್ಡ್ರನ್ ಪ್ಲೇ ಹೋಮ್ ಗಳು. ಮಕ್ಕಳನ್ನ ಹೆತ್ತವರು ಕೆಲಸದ ಭಾರನು ಹೊತ್ತಿರೊದರಿಂದ, ಬೆಂಗಳೂರ ಸಿಟಿ...ಬ್ಯುಸಿ ಲೈಪ್ನಲ್ಲಿ ಕನಿಸ್ಟಪಕ್ಷ ೫೦-೬೦% ಮಕ್ಕಳ ಪಾಲನೆ ಈ ಪ್ಲೇ ಹೋಮ್ ಗಳಲ್ಲೆ ಇರಬಹುದು. ಬೆಳಗಿನ ಜಾವ ೮ ಘಂಟೆಗೆ ಮಗುವನ್ನು ಅಲ್ಲಿ ಬಿಟ್ಟರೆ ಮತ್ತೆ ಮರಳಿ ಸಂಜೆ ೬ ಗಂಟೆಯ ವರೆಗೆ ಮಗುವಿನಬಗ್ಗೆ ತಲೆಕೆಡಿಸಿಕೋಳ್ಳುವ ವಿಚಾರವೆ ಇಲ್ಲ, ಪ್ಲೇ ಹೋಮನಲ್ಲಿರೊ ಆಯಾಗಳು ನಿಮ್ಮಮಗುವಿನ ಪಾಲನೆಯನ್ನು ನಿಮ್ಮಪರವಾಗಿ ಚೇನ್ನಾಗಿ ಮಾಡ್ತಾರೆ. ದಿನದ ಕನಿಷ್ಟ ೪೦% ಸಮಯವನ್ನು ಮಗು ಪ್ಲೇ ಹೋಮ್ ನಲ್ಲಿ ಇನ್ನ್ನುಳಿದ ಮಕ್ಕಳೋಂದಿಗೆ, ಅಲ್ಲಿರೊ ಆಟಿಕೆ ಸಾಮಾನುಗಳೊಂದಿಗೆ, ಕೆಲವಮ್ಮೆ ತನ್ನದೆ ಆದ ಲೋಕದಲ್ಲಿ ಮತ್ತು ತಾಯಿ ಸಮಾನರಾದ ಆಯಾಗಳೋಂದಿಗಿ ಕಳೆಯುತ್ತವೆ.

ಕಛೇರಿಯಲ್ಲಿ ಹೊಸತಾಗಿ ನಿರ್ಮಾನವಾದ ಜೀಮ್ಮನ ಪಕ್ಕದಲ್ಲಿರೋದು, ಕಛೇರಿಯಲ್ಲಿ ಕೆಲಸ ಮಾಡುವ ಉದ್ಯೊಗಿಗಳ ಚಿಕ್ಕ ಮಕ್ಕಳನ್ನು ನೋಡಿಕೊಳ್ಲಲೆಂದೆ ಕಟ್ಟಿಸಿದ ಪ್ಲೇ ಹೋಮ್!!!. ಆವತ್ತು ಶುಕ್ರವಾರ, ಸ್ವಲ್ಲ ಜಾಸ್ತಿ ಸಮಯವನ್ನು ಜೀಮ್ನಲ್ಲಿ ಕಳೆದು...ಸುಮಾರು ೬:೩೦ಕ್ಕೆ ಹೊರಬಂದೆ. ಪಕ್ಕದಲ್ಲೆರೊ ಪ್ಲೇ ಹೋಮನ ಬಾಗಿಲಲ್ಲಿ ನಿಂತ ಒಬ್ಬ ಮಹಿಳೆಯನ್ನು ಗಮನಿಸಿದೆ, ಅವಳ ಮಾತಿನಲ್ಲಿ, ನಡೆಯಲ್ಲಿ ಅವಸರವೆದ್ದು ಕಾನೂತ್ತಿತ್ತು. ಪಾಪ....ವಾರದ ಅಂತ್ಯ ನೋಡಿ...ವೀಕೆಂಡ. ಪಕ್ಕದಲ್ಲಿರೊ ಇನ್ನೊಬ್ಬ ಮಹಿಳೆಯ ಬಳಿ ಇರುವ ಮಗುವನ್ನು ಈಕೆ ತನ್ನಡೆಗೆ ಪ್ರೀತಿಯಿಂದ ಕೂಗಿ ಕರೆದಳು. ಮಗು ಅದನ್ನು ಗಮನಿಸಲ್ಲಿಲ್ಲಾ ಅನಿಸುತ್ತೆ ಬಹುಶ್:, ತನ್ನ ಪಾಡಿಗೆ ಅದರದೆ ಲೋಕದಲ್ಲಿ ಲಿನವಾಗಿತ್ತು. ಏರಡು-ಮೂರು ಸಾರಿ ಕರೆದರು...ಏನು ಉತ್ತರ ಬರಲಿಲ್ಲ. ಅಷ್ಟರಲ್ಲೆ ಇನ್ನೊಬ್ಬ ಮಹಿಳೆ ಮಗುವನ್ನ ಬಾಗಿಲಿನವರೆಗೆ ತಂದು "ನೋಡಲ್ಲಿ....ಯಾರು ಬಂದಿದಾರೆ ಅಂತಾ....ಹೋಗು" ಅಂತ ಹೇಳುತ್ತಲೆ ಮಗುವನ್ನ ಬಾಗಿಲಲ್ಲಿ ನಿಂತ ಮಹಿಳೆಯ ಹತ್ತಿರಕ್ಕಿ ತಂದಳು, ಮಗುವನ್ನು ಪ್ರೀತಿಯಿಂದ ತನ್ನಡೆಗೆ ತಗೆದುಕೊಳ್ಳಲು ಈಕೆ ತನ್ನ ಕೈಗಳನ್ನ ಮುಂದೆ ಮಾಡಿದಳು. ಮಗುಮಾತ್ರ ಆ ಮಹಿಳೆಯನ್ನ ತೊರೆದು...ಈ ಮಹಿಳೆ ಹತ್ತಿರಕ್ಕೆ ಬರಲು ಮನಸ್ಸೆ ಇಲ್ಲದವರಂತೆ ವರ್ತಿಸಿತು. ಸ್ವಲ್ಪ ಸಮಯದ ನಂತರ ಹಾಗು ಹೀಗೂ ಮಾಡಿ ಆ ಮಹಿಳೆ ಮಗುವನ್ನು ಸಮಾಧಾನ ಮಾಡಿ ಮತ್ತೆ ಕರೆತಂದು..."ನೋಡಲ್ಲಿ...ಯಾರು ಬಂದಿದಾರೆ..ಮಮ್ಮಿ..ಬಂದಿರೋದು ಚಿನ್ನು.." ಅಂತಾ ಮಗುವನ್ನ ಬಾಗಿಲಲ್ಲಿ ನಿಂತ ಮಗುವಿನ ತಾಯಿಯ ಬಳಿಗೆ ಕೋಟ್ಟಳು.

ಆವಾಗಲೆ ನನಗೆ ಗೋತ್ತಾದದ್ದು ...ಅವಳು ತನ್ನ ಮಗುವನ್ನು ಅಲ್ಲಿಂದ ಕರೆದೊಯ್ಯಲು ಬಂದಿದ್ದಳು ಅಂತ. ಕ್ಷಣದಲ್ಲಿ ನನ್ನ ಬಾಲ್ಯ ಜೀವನವು ನನ್ನ ಮನಸ್ಸಿನ ಪರದೆ ಮೇಲೆ ಹಾಗೆ ಮತ್ತೊಮ್ಮೆ ಮೂಡಿ ಹೋಯಿತು.....ಬಹಳ ವ್ಯತ್ಯಾಸ ಅನಿಸ್ತು ಹಾಗೆ ಅನಿವಾರ್ಯನು ಇರಬಹುದು ಅನಿಸ್ತು.

Friday 27 June, 2008

ಹಾಟ್ ಸೀಟ್


ಇಂಜಿನೀಯರಿಂಗ್ ಪದವಿ ಸಿಕ್ಕಾದಮೆಲೆ ಐಟಿ ಸಿಟಿ ಬೆಂಗಳೂರನಲ್ಲಿ ನಾಲ್ಕು ತಿಂಗಳು ನೌಕರಿ ಅಲೆದಾಟ, ಅಮೇಲೆ ಡಿಸಂಬರ ೧, ೨೦೦೪ಕ್ಕೆ ಸ್ವದೇಶದ್ದೆ ಆದ ಸಾಪ್ಟವೇರ್ ಕಂಪನಿಯಲ್ಲಿ ನೌಕರಿ. ಇನ್ನೆನು ತಿಂಗಳು ಮುಗಿತು ಅನ್ನೋ ಅಸ್ಟರಲ್ಲಿ ಕೋತಿ ಮರದಿಂದಾ ಮರಕ್ಕೆ ಜಿಗಿಯೊ ಹಾಗೆ ಮತ್ತೆ ಕಂಪನಿ ಬದಲಾವಣೆ. ಜನೇವರಿ ೨೪ ೨೦೦೫ಕ್ಕೆ ಮಲ್ಟಿ ನ್ಯಾಷನಲ್ಲ ಕಂಪನಿ ಸೇರಿಕೊಂಡೆ. ಮೊದಲ ದಿನಗಳು ಮೆಂಟರ್ ಆಗಿ ಆಂಜು ಚಂದ್ರನ್ ಕೇರಳದವಳು, ಮತ್ತೆ ಏರಡು ತಿಂಗಳನಂತರ ಮದುವೆ ರಜೆಯಿಂದ ಬಂದ ರಂಜನಿ ನಾಗರಾಜನ್ ಮೆಂಟರ್ ಆದ್ರು, ಇವರು ತಮಿಳುನಾಡಿನವರು. ಕಾಲೇಜನಲ್ಲಿ UNIX ಕಲಿತಿರೋದರಿಂದಾ ಮೊದಲು ಬಂದ ಕೆಲಸ ಅಸ್ಟೆನು ಕಸ್ಟ ಇರಲಿಲ್ಲ, ಯಾಕಂದ್ರೆ ಮೊದಲ ದಿನಬಳಲ್ಲಿ ಬರಿ ಹೂಣಸೆ ಬೀಜಾ ಆರಿಸೊ ಕೆಲಸ.ಕೆಲಸದಬಗ್ಗೆ ಹೇಚ್ಚಿಗೆ ಹೇಳೊದು ಅವಶ್ಯ ಇಲ್ಲಾ, ಹೆಂತಹಾ ಕೆಲಸ ಅಂತ ಏಲ್ಲರಿಗೂ ಗೋತ್ತಿರೊ ವಿಷಯ.


ಅವತ್ತು ಟೀಮ್ ಪಾರ್ಟಿ, ಕಛೇರಿಗೆ ಹತ್ತಿರಾನೆ ಇರೊ ರೈಸ್ ಬಾಲ್ ಹೋಟಲ್ನಲ್ಲಿ. ರಂಜನಿ ಮೆಂಟರ್ ಆದ್ದರಿಂದ ಟೀಮ್ನ್ ನಲ್ಲಿ ನಾನು ಜಾಸ್ತಿ ಮಾತಾಡ್ತ್ಸ್ತಿದ್ದು ಅವರನ್ನೆ, ಇಲ್ಲಾಂದ್ರೆ ಅಂಜು. ಟೀಮನಲ್ಲಿ ಒಟ್ಟು ೧೬ ಮೇಂಬರ, ಹೋಟಲ್ನಲ್ಲಿ ಹೋಗ್ತಿದ್ದಹಾಗೆ ರಂಜನಿ ಪಕ್ಕದಲ್ಲೆರೊ ಕಾಲಿ ಕುರ್ಚಿ ಅಲಂಕರಿಸಿದೆ. ಚೇರ್ ಅಕ್ರಮಿಸೋಕೆ ಅಂತ ಬಂದಿದ್ದ ಚೇತನ ನನ್ನ ಪಕ್ಕದಲ್ಲೆ ಕಾಲಿಯಿರೊ ಇನ್ನೊಂದು ಕುರ್ಚಿಲಿ ಕೂತಗೊಂಡ. ಅಸ್ಟರಲ್ಲೆ ಸುತ್ತಲು ಕುತ್ಗೊಂಡಿದ್ದ ಇನ್ನುಳಿದ ಟೀಮ್ ಮೆಂಬರಗಳು ಹೊಟ್ಟೆ ಹರಿದು ಕರಳು ಹೊರಗೆ ಬರೊ ಹಾಗೆ ನಗೊಕೆ ಸೂರು ಹಚಗೊಂಡ್ರು. ಯಾಕೆಅಂತಾ ಕೇಳೊಕೆ ನನ್ಗೆ ದ್ಯೈರ್ಯ ಇರಲಿಲ್ಲ ಹಾಗೆ ಇಂಟರೆಸ್ಟು ಬರಲಿಲ್ಲಾ. ಏಲ್ಲರು ಹೋಟ್ಟೆ ಬಿರಿಯೊಹಾಗೆ ಹತ್ತು ಇಪ್ಪತ್ತು ನಿಮಿಷ ನಕ್ಕು ಅಮೇಲೆ ಜಠರ ತುಂಬಿಸೊಕೆ ಸೂರು ಹಚಕೋಂಡ್ರು.

ಏಡಕ್ಕೆ ಚೇತನ್ ಹಾಗೆ ಬಲಗಡೆ ರಂಜನಿ ಮತ್ತೆ ಮದ್ದ್ಯದಲ್ಲಿ ನಾನು ಮಾತಡ್ತಾ ತಿನ್ನೊ ಕಾರ್ಯಕ್ರಮ ನಡಿತಾಯಿತ್ತು. ಚೇತನ, ನನ್ಗೆ ಕಳೆದ ಇಪ್ಪತ್ತು ದಿನಗಳಿಂದ ಪರಿಚಯ ಇದ್ದೊನು, ಮೂಲತಹಾ ಮೈಸೂರಿನವನು. ಚೇತನಗೆ coding ಬಿಟ್ಟ್ರೆ ಬೇರೆ ವಿಷಯಗಳಲ್ಲಿ ಆಸಕ್ತಿ ಇದ್ದವನು ಅಂತಾ ನನ್ಗಾಗ್ಲೆ ತಿಳದಿತ್ತು. ರಂಜನಿ ಮೆಂಟರ್ ಆದ್ದರಿಂದ ಅವರನ್ನಾ ಚೇತನಗೆ ಪರೆಚಯಿಸೊಣ ಅಂತ ವಿಚಾರ ಬಂದದ್ದೆ ತಡಾ, ಪರೆಚಯಕೊಡೊಕೆ ಸ್ಟಾರ್ಟ್ ಮಾಡ್ದೆ:

"ರಂಜನಿ, ಇವರು ಚೇತನ ಅಂತಾ ಮೈಸೂರಿನವರು"

ಅದಕ್ಕೆ ರಂಜನಿ "ಹ್ಯೌದು" ಅಂತಾ ಕಡಿಮೆ ದ್ವನಿಯಲ್ಲಿ ಉತ್ತರಿಸಿದ್ರು. ಚೇತನ್ ಕೂಡಾ ಒಮ್ಮೆ ನನ್ನ ಮೊಕಾನೊಡಿ ಸುಮ್ಗಾದ್ರು.
ಹಾಗೆ ನನ್ನ ಮಾತನ್ನ ಮುಂದುವರಿಸಿದೆ,


"ಚೇತನ್ ಮತ್ತೆ ನಾನು ಒಂದೆ ಕಂಪೋನೇಂಟನಲ್ಲಿ ಕೆಲಸ ಮಾಡೊದು", ಇಬ್ಬರು ಕಡೆಯಿಂದ ಉತ್ತರಬರಲಿಲ್ಲಾ ಅನ್ನೋದನ್ನ ನಾನು ಗಮನಿಸಲೆ ಇಲ್ಲಾ ಅನಿಸುತ್ತೆ.


"ಚೇತನಗೆ ತಬಲ ನುಡಿಸೋದು ಅಂದ್ರೆ ತುಂಭ ಪ್ರೀತಿ, ಇವರು ಚೇನ್ನಾಗಿ ನುಡಿಸ್ತಾರಂತೆ" ಅಂದೆ.

ಆಗ ರಂಜನಿ ಕೂಲಾಗಿ "ಹೌದು, ಇದೆಲ್ಲಾ ನನ್ಗೆ ಗೊತ್ತು.....ಚೇತನ್ ನನ್ನ ಗಂಡ" ಅಂದ್ರು. ಆವಾಗ್ಲೆ ನನ್ಗೆ ತಿಳಿದದ್ದು, ಇಬ್ಬರ ನಡುವೆ ಕುತಗೊಂಡಾಗ ಯಾಕೆ ಉಳಿದೆಲ್ಲಾ ಟೇಮ್ ಮೆಂಬರ್ಸ್ ನಕ್ಕಿದ್ದು ಅಂತಾ. ಆದ್ರೆ ನಾನಾಗ್ಲೆ ಹಾಟ್ ಸೀಟನಲ್ಲಿ ಕುತ್ಗೊಂಡಿದ್ದೆ "ಕಬಾಬ್ ಮೇ ಹಡ್ದಿ" ತರಾ.

Tuesday 24 June, 2008

ಅಕ್ಟೋಬರ್ ೨ನೆ ದಿನ ಎರಡು ಮೊಟ್ಟೆ ಕೊಟ್ಟೆ ಮೇಸ್ಟ್ರುಗೆ

ಒಂದನೆ ತರಗತಿಯಲ್ಲಿದ್ದೆ ವ್ಯಾಸಂಗದಲ್ಲಿ ಬೊಟ್ಟೋಮನಲ್ಲಿದ್ರು ಕಿತಬಿ ಉಡಾಳತನದಲ್ಲಿ ಮುಂದಿದ್ದೆ. ಪಕ್ಕದ ಮನೆಲಿ ಬೆಕ್ಕು ಹಾಲು ಕೂಡುದೊದ್ರೆ ಗಂಜೀಹಾಳ ಸಂಗಪ್ಪಾರ ಮೊಮ್ಮಗ ಆನಂದಾನೆ ಕುಡದಾ ಅನ್ನೊ ಜನಪ್ರೀಯತೆ ಬೆಳಸಿಕ್ಕೊಂಡಿದ್ದೆ. ಏನಿದ್ದು ಬೆಕ್ಕಿಂದೆ ಅದ್ರುಸ್ಟ ಅನ್ನಿ, ಯಾರದೊ ದುಡ್ಡು ಯಲ್ಲಮ್ಮನ ಜಾತ್ತ್ರಿ. ಇಸ್ಟೆಲ್ಲ ಇರ್ಬೆಕಾದ್ದೆ ಮನೆಲಿ ಏಂಟಾಣೆ ಕೊಡಬೆಕಾದ್ರು ವಿಚಾರ ಮಾಡೊದು ಸಹಜ. ಈ ಪ್ರೊಬ್ಲೆಮ್ ಬಗಿಹರಿಸೊಕೆ ಅಂತಾ ನಮ್ಮಜ್ಜಾ ಒಂದು ಪ್ಲಾನ್ನ್ ಮಾಡಿದ್ರು:

ಏಂಟಾಣೆ ಬೇಕಾದ್ರೆ ದಿನಾ ಮನೆಲಿರೊ ಮೂರು ಹಸ್ಸು ಮತ್ತು ನಾಲ್ಕು ಯೆತ್ತಿನ ಸಗೀಣೆ ಬಳ್ದು, ತಿಪ್ಪಿಗೆ ಹಾಕಿಬರಬೆಕು. ನಾಲ್ಕಾಣೆ ಬೇಕಾದ್ರೆ ಮನೆಲಿರೊ ಇಪ್ಪತ್ತು ದೇವರ ಫೊಟೊ ಪೂಜೆ ಮಾಡಬೇಕು. ನನ್ನ ಆಯ್ಕೆ ಒಂದನೆದೆ ಅಗಿತ್ತು, ಯಾಕಂದ್ರೆ ಕೆಲಸ ಕಡಿಮೆ ದುಡ್ಡು ಜಾಸ್ತೀ ನೋಡಿ. ಹಿಗೆ ಕಸ್ಟಾಪಟ್ಟು ಸಗಿಣೆ ಬಳ್ದು, ಪೊಕೇಟ್ಟ್ಟ್ನಲ್ಲಿ ಸ್ವಲ್ಪ ಚಿಲ್ರೆ ಗೋಲಿಗುಂಡ ಕರಿದಿಸೋಕೆ ಅಂತಾ ಇಟ್ಕೊಂಡಿದ್ದೆ.

ಅಗ್ಲೆ ಅಕ್ಟೊಬರ್ ರಜೆದಿನಾ ಬಂದಿತ್ತು ರಜೆಲಿ ಗೋಲಿ, ಚಿನಿಪಣಿ ಆಡೊ ಸಮಯ ಕರಿದಿಸೊಕೆ ಚಿಲ್ರೆ ಬೇಕಲ್ಲ. ಊರಲ್ಲಿ ಏರಡು ಶಾಲೆ, ನಾನು ಏರಡನೆ ನಂಬರ್ ಶಾಲೆಲಿ ಓದತಿದ್ದೆ. ಶಾಲೆ ಮನೆಗೆ ಹತ್ರಾನೆ ಹತ್ತು ಹೆಜ್ಜೆ ಅಸ್ಟೆ. ಆ ದಿನ ಅಕ್ಟೊಬರ್ ೨, ಮಹಾತ್ಮಗಾಂದಿ ಜನ್ಮದಿನಾ. ಯಾವತ್ತು ಇಲ್ಲದೊನು ಅವತ್ತು ಒಂದನೆ ಸಾಲಲ್ಲೆ ಕುತ್ಗೋಂಡೆ, ಯಾಕಂದ್ರೆ ಜಲ್ದಿ ಸ್ವೀಟ ಚುರಮರಿ ಮತ್ತೆ ಖಾರಾ ತಗೊಂಡು ಜಾಗಾಬಿಡೋಕೆ. ಏದರ್ಗಡೆ ಮಹಾತ್ಮಗಾಂದಿ ಫೋಟೊ, ಅದರಪಕ್ಕದಲ್ಲೆ ನಮ್ಮ ಸರ್. ಗಾಂಧಿ ಮತ್ತು ನಮ್ಮ ಮೇಸ್ಟ್ರಗೆ ಬರಿ ಒಂದರಲ್ಲೆ ಹೊಲಿಕೆ ಇತ್ತು!!!. ಗಾಂಧಿ ಫೋಟೊನ ಮತ್ತೆ ನಮ್ಮ ಸರ್‍ನ ಹೋಲಿಕೆ ಮಾಡ್ತಾ
ಕುತ್ಗೋಂಡಿದ್ದೆ, ಏಲ್ಲಿಂದಾ ಬಂತೊ ಕೈ ಸಿದಾ ಕಿಸೇಲಿರೊ ಏರಡು ರೂಪಾಯಿನ ಕಿತ್ಗೊಂಡೆ ಬಿಟ್ಟು. ಕಸ್ಟಾಪಟ್ತು ಸಗಿಣೆ ಬಳ್ದು ಗಳಿಸಿದ ಕಾಸೂ ಸಿಟ್ಟು ಬರದೆ ಇರುತ್ತಾ, ಇನ್ನೆನು ಕೈ ಹಿಡದು ಕಡಿಬೇಕು ಅಂತಿದ್ದೆ ನೊಡಿದ್ರೆ ನಮ್ಮ ಮೆಸ್ಟ್ರು!!! ಆವಾಗ್ಲೆ ಅನಿಸಿದ್ದು ಗಾಂಧಿತಾತಗು ನಮ್ಮ ಸರ್ಗು ಬರಿ ತಲೆ ಬಿಟ್ರೆ ಬೇರೆ ಏಲ್ಲಾದರ್ಲ್ಲು ವ್ಯತ್ಯಾಸಅಂತಾ. ಸಿಟ್ಟು ನೆತ್ತಿಗಾಗ್ಲೆ ತಲಪಿತ್ತು "ಸರ್ ಏರಡು ರೂಪಾಯಿ ನಮ್ಮಜ್ಜಂದು, ಟಪಾಲ್ ತರೋಕೆ ಅಂತಾ ಕೋಟ್ಟಿದ್ದ್ರು ಕೋಡ್ರೀ ಸರ್" ಅಂದೆ. ಅದಕ್ಕೆ "ಲೇ ಊಡಾಳ ಆನ್ಯಾ, ಅಜ್ಜನ್ ಕಿಸೆ ಕತ್ರಿಹಾಕಿ ಏಲ್ಲಾ ಸೋರ್ಸೊಕೆ ಹುಟ್ಟಿ ನೋಡ್ಲೆ ನೀನು" ಅಂದ್ರು. ಸಿಟ್ಟು ಜಾಸ್ಟಿಈತ್ತು ಮೊಸ್ಟಲಿ ಅನುವಂಶ ನಮ್ಮಜ್ಜ ಕೋಟ್ಟಿರ್ಬೆಕು, ಅಜ್ಜಂಗು ಸಿಟ್ಟು ಜಾಸ್ತಿ. ಇನ್ನೊಂದು ಸಾರಿ ಕೇಳೊ ಆಸಾಮಿ ನಾನಾಗಿರ್ಲಿಲ್ಲಾ. ಏರಡು ರೂಪಾಯಿ, ಮೆಸ್ಟ್ರು ಮತ್ತೆ ಗಾಂಧಿ ಯೆಲ್ಲಾ ಬಿಟ್ಟು ಹೋರಗ ಬಂದೆ. ರಸ್ತೆಲೆ ನಿಂತಕೊಂಡು ರೂಪಾಯಿ ವಾಪಸ್ ತಗೋಳ್ಳೊಕೆ ವಿಚಾರಸದೆ.

ಆಗ ನನ್ನ್ ತಲೆಲಿ ಬಂದಿದ್ದು "लगे रहो मुन्ना बाई MBBS" ಗಾಂಧಿಗಿರಿ ಅಲ್ಲಾ, ಸ್ವಲ್ಪಾ ಗುಂಡಾಗಿರೀ. ಅದಕ್ಕೆ ನನ್ಗೆ ಮೊದಲು ತಲೆಗೆ ಬಂದಿದ್ದು ಮಂತ್ರಿ ಶರಣಪ್ಪನ್ನನ ಮನೆಲಿರೋ ಕೋಳಿ ಮತ್ತೆ ಅದರ ಮೋಟ್ಟೆ. ಕೋಳಿ ಮೋಟ್ಟೆ ಕದಿಯೊದೆನು ನನ್ಗೆ ಹೋಸ್ತೆನಲ್ಲಾ, ಯಾಕಂದ್ರೆ ದಿನಾಲು ಸಂಜೆ ಶರಣಪ್ಪನ್ನ ಮನೆಲಿರೊ ಏಲ್ಲಾ ಕೋಳಿ, ಹೂಂಜಗಳನ್ನಾ ಊರಲ್ಲೆಲ್ಲಾ ಹುಡಕಿ ಮತ್ತೆ ಪುಟ್ಟೆಗೆ ತಂದು ಹಾಕೋದು ಶರಣಪ್ಪನ್ನ ಮತ್ತೆ ನಾನು. ಶಾಲೆಯಿಂದಾ ಶರಣಪ್ಪನ್ನನ ಮನೆ ಇಪ್ಪತ್ತು ಹೆಜ್ಜೆ, ಹೋಗಿ ಏರಡು ಮೊಟ್ಟೆ ತಂದೆ. ಯುದ್ದಕ್ಕೆ ಹೋಗೊ ಯೋಧನಹಾಗೆ ಶಾಲೆಗೆ ವಾಪಸ್ ಬಂದೆ. ಬಾಕಲಲ್ಲೆ ನಿಂತಕೊಂಡು ಒಂದು ಮೋಟ್ಟೆನಾ ಸರ್ ತಲೆಗೆ ಏಸ್ದೇ, ಮೇಸ್ತ್ರ ಪೂಣ್ಯಾ ಮಿಸ್ಸ್ ಆಯ್ತು. ಅಸ್ಟರಲ್ಲೆ ಮೇಸ್ಟ್ರು ಕಿಂಡಕಿಲಿ ನಿಂತಗೊಂಡು ಪಕ್ಕದಲ್ಲೆ ಬಟ್ಟೆವಗಿತಿದ್ದ ನಮ್ಮ ತಾಯಿನ ಕೊಗಿ "ಆಕ್ಕೊರ್ರೆ!!! ನಿಮ್ಮಗಾ ಶಾಲಿಗೆ ತತ್ತಿ ತಗೊಂಡು ವಗಿಯಾಕೆ ಬಂದಾನೆ, ಜಲ್ದಿ ಬರ್ರಿ ಇಲ್ಲಿ" ಅಂತಾ ಕೂಗಿ ಕೋಂಡ್ರು. ನಮ್ಮ ತಾಯಿ ಬಟ್ಟೆಬಿಟ್ಟು ಬಂದು ನನ್ನಾ ಸಮಾದಾನ ಮಾಡಿ ಮನೆಗೆ ಕರದೊಯ್ದ್ರು.

ನನ್ಗೆ ಏರಡು ರೂಪಾಯಿ ಮಾತ್ರಾ ವಾಪಾಸ್ ಸಿಗಲಿಲ್ಲಾ, ಅದ್ರೆ ಏರಡನೆ ತರಗತಿಗೆ ಬೇರೆ ಶಾಲೆಗೆ ಹೋಗ ಬೇಕಾಯ್ತು.